ನಾಳೆಯಿಂದ ತೆರೆಗೆ ‘ಕಿರಗೂರಿನ ಗಯ್ಯಾಳಿಗಳು
Posted date: 10 Thu, Mar 2016 – 10:28:03 AM

ಮೇಘ ಮೂವೀಸ್ ಲಾಂಛನದಲ್ಲಿ ರವೀಂದ್ರ ಅವರು ನಿರ್ಮಿಸಿರುವ ‘ಕಿರಗೂರಿನ ಗಯ್ಯಾಳಿಗಳು ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತವಾಗಿರುವ ಈ ಚಿತ್ರವನ್ನು ಸುಮನ ಕಿತ್ತೂರು ನಿರ್ದೇಶಿಸಿದ್ದಾರೆ.  ‘ಕಿರಗೂರಿನ ಗಯ್ಯಾಳಿಗಳು ಚಿತ್ರಕ್ಕೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಮತ್ತು ಸುಮನ ಕಿತ್ತೂರು ಬರೆದಿದ್ದಾರೆ.    ಸಾಧುಕೋಕಿಲ ಅವರು ಹಿನ್ನಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ಮನೋಹರ್ ಜೋಶಿ ಅವರ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಅವರ ಸಂಕಲನವಿದೆ.
ಶ್ವೇತ ಶ್ರೀವಾಸ್ತವ್, ಯೋಗೀಶ್(ಲೂಸ್‌ಮಾದ), ಅಜಯ್‌ರಾವ್, ಕಿಶೋರ್, ಸುಕೃತ ವಾಗ್ಲೆ, ಸೋನು ಗೌಡ, ಕಾರುಣ್ಯರಾಮ್, ಅಚ್ಯುತಕುಮಾರ್, ಶರತ್ ಲೋಹಿತಾಶ್ವ, ಸುಂದರ್, ಎಸ್.ನಾರಾಯಣ್, ಗಿರಿಜಾ ಲೋಕೇಶ್, ಲಕ್ಷ್ಮೀಚಂದ್ರಶೇಖರ್, ರವಿಶಂಕರ್ ಗೌಡ, ಅನಂತವೇಲು, ರಾಹುಲ್ ಮಾಧವನ್, ನಿಖಿಲ್ ಮಂಜು, ಶಾಂತ ಆಚಾರ್ಯ, ಶೊಭ್‌ರಾಜ್, ಮಂಡ್ಯ ರಮೇಶ್, ಧರ್ಮ, ಕೆ.ಎಸ್.ಡಿ.ಎಲ್ ಚಂದ್ರು, ಸಂಪತ್‌ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed